ನನ್ನ ಬಗ್ಗೆ ತಿಳಿಯಬೇಕೆ ?

My photo
A guy with habit of learning from everyone and from anything... I would say i'm a guy hiding all my sorrows and sadness behind my "SMILE" :P Come in with me.. You should be able to write more "about me" :) ಭಾವನೆಗಳ ಲೋಕದಲ್ಲಿ ವಿಹರಿಸಲು ಇಷ್ಟ. ಒಂಟಿತನ ಹಿತವೆನಿಸುತ್ತದೆ, ಗುಂಪಿನಲ್ಲಿರುವಾಗ ಖುಷಿ. ಕನಸು ಕಾಣುವುದು ಕಡಿಮೆ, ನೆನಪುಗಳ ನಡುವೆ ಕನಸುಗಳು ಕಳೆದುಹೋಗುತ್ತವೆ.

Sunday, 3 May 2020

॥ श्रीपेजावरवराष्टकम् ॥

श्रीमन्न्यायसुधानेककृतसन्मङ्गलान् बुधान्।
अनेकग्रन्थकर्तृन् च वन्दे सुज्ञानवृद्धये॥1॥
ನಾಲ್ವತ್ತು ಶ್ರೀಮನ್ನ್ಯಾಯಸುಧಾಮಂಗಲಗಳಾಚರಿಸಿ ನಾಲ್ಮೊಗನ ಶಾಸ್ತ್ರದಿ ಗ್ರಂಥಗಳ ರಚಿಸಿ
ಜ್ಞಾನಸೂರ್ಯರೆನ್ನ ಹೃದಯದಿ ತತ್ವಜ್ಞಾನ ಬೀಜವ ಬಿತ್ತಲು ಗುರುರಾಜರ ಇಂದು ವಂದಿಸುವೆ॥

नैकशिष्यप्रशिष्यान् च राजभ्यो मार्गदर्शकान्।
नित्यपूजाजपासक्तान् नौमि भक्त्यभिवृद्धये॥2॥
ಬಹುಶಿಷ್ಯಪ್ರಶಿಷ್ಯರನು ಹೊಂದಿ ರಾಜನಾಯಕರಿಗೆ ಧರ್ಮಮಾರ್ಗವನು ತೋರುತ್ತ
ನಿತ್ಯಪೂಜಾಜಪತಪನಿರತರೆನ್ನಲಿ ಭಕ್ತಿ ಅಂಕುರಿಸಲು ಯತಿರಾಜರ ಇಂದು ನಮಿಸುವೆ ॥

समाजोद्धारकार्याणि कर्तृन् धर्मोपदेशकान्।
नमाम्यभिनवव्यासतीर्थान् वैराग्यसिद्धये॥3॥
ಅಭಯದಾನಾದ್ಯನೇಕ ಸಮಾಜಮುಖಿ ಕಾರ್ಯಗಳ ನಡುವೆಯೂ ಭಕ್ತರಿಗೆ ಧರ್ಮೋಪದೇಶವನು
ನೀಡುವವರೆನ್ನಲಿ ಸದ್ವೈರಾಗ್ಯವೀಯಲು ಅಭಿನವವ್ಯಾಸರಾಜರ ಇಂದು ನಮಿಸುವೆ॥

नैकालङ्कारकर्तृन् तान् हरिवाणे सदा रतान्।
कृतानेकव्रतान् सेवे तपसश्चाभिवृद्धये॥4॥
ಇಳಿವಯಸಿನಲು ಹರಿವಾಣಸೇವಾ ಕೃಷ್ಣಾಲಂಕಾರಗಳ ಮಾಡುತ್ತ ಅನೇಕ
ವ್ರತಗಳನಾಚರಿಸಿದವರೆನ್ನಲಿ ತಪವನೀಯಲು ಮುನಿರಾಜರ ಇಂದು ಸೇವಿಸುವೆ॥

लोककल्याणमाकर्तुं कल्याणनगरे स्थितान्।
राष्ट्रहंसान् भजे योगपटून् पुण्याभिवृद्धये॥5॥
ಲೋಕಹಿತಕ್ಕಾಗಿ ಇನ್ನು ಕಲ್ಯಾಣನಗರದಿ ನೆಲೆನಿಂತ ರಾಷ್ಟ್ರಸಂತರೆನ್ನ
ಪುಣ್ಯವರ್ಧಿಸಲು ಯೋಗಪಟು ಯೋಗಿರಾಜರ ಇಂದು ಭಜಿಸುವೆ॥

शिष्येऽधिकारं भुवनेऽद्य रिक्तं
जनेषु प्रीतिं अखिलेषु यावत्।
शिष्येषु शास्त्रं हृदयेषु रामं
विश्वेशयोगीशविशेषमान्यः॥6॥
ಶಿಷ್ಯರಲಿ ಪೂಜಾಧಿಕಾರವಿಟ್ಟು ಎಲ್ಲ ಜನರಲಿ ಪ್ರೀತಿಯನಿಟ್ಟು
ವಿದ್ಯಾರ್ಥಿಗಳಲಿ ಶಾಸ್ತ್ರಜ್ಞಾನವಿಟ್ಟು ಹೃದಯಗಳಲಿ ರಾಮನ್ನಿಟ್ಟು (ದೇಶದ ಹೃದಯ ಅಯೋಧ್ಯೆ) ॥

निधाय नेतृष्वपि नैतिकत्वं
निधाय भक्तेषु च धार्मिकत्वं।
निधाय धर्मेषु तु सामरस्यं
वव्राज श्रीकृष्णपदं यतीश्वरः॥7॥
ಆಳುವವರಲಿ ನೈತಿಕತೆಯನಿಟ್ಟು ಭಕ್ತರಲಿ ಧಾರ್ಮಿಕತೆಯನಿಟ್ಟು
ಧರ್ಮಗಳಲಿ ಸಹಿಷ್ಣುತೆಯನಿಟ್ಟು ಜಗದಲಿ ತುಂಬಲಾಗದ ನಷ್ಟವನಿಟ್ಟು
ಸಾಕ್ಷಿನಾಥ ಶ್ರಿಕೃಷ್ಣನ ಪಾದಗಳಡಿಗೆ ನಡೆದರೋ ಯತೀಶ್ವರವಿಶ್ವೇಶಸಂತ॥

श्रीविश्वेशान् प्रणौम्याप्तान् पञ्चपर्यायभूषणान्।
एकीकर्तृन् द्विजान् हिन्दून् अयोध्यारामपूजकान्॥8॥
ಆಪ್ತರ ಪಂಚಪರ್ಯಾಯಭೂಷಿತರ ವಿಪ್ರರ ಹಿಂದೂಗಳ ಒಗ್ಗೂಡಿಸಿದವರ
ಅಯೋಧ್ಯೆಯಲಿ ರಾಮನ ಪೂಜಿಸಿದ ವಿಶ್ವೇಶತೀರ್ಥರಿಗೆ ನಮಿಸುವೆನು॥

आलूरान्वयजातेन गुर्वनुग्रहमिच्छता।
साक्षीनाथेन रचितं पेजावरवराष्टकम्॥9॥
विश्वेशपाददत्तश्रीहयास्यार्चनपुण्यतः।
रचितं चार्पितं तस्मिन् गुरुश्रीपादपङ्कजे॥10॥
ಗುರ್ವನುಗ್ರಹಕಾಗಿ ಈ ಅಷ್ಟಕವು ಗುರುಗಳೇ ಕೊಟ್ಟ
ಹಯಾಸ್ಯಮೂರ್ತಿಯ ಪೂಜಾಪುಣ್ಯಫಲವು ಗುರುಗಳ ಪಾದಕಮಲಗಳಿಗೇ ಸಮರ್ಪಿತವು ॥

ಛಂದೋಭಂಗ, ಲಿಂಗವ್ಯತ್ಯಯಾದಿ ದೋಷಗಳಿಂದ ಕೂಡಿದ್ದರೂ ಹಂಸಕ್ಷೀರನ್ಯಾಯದಿಂದ ಗುರುಗಳ ಅನುಗ್ರಹಕ್ಕಾಗಿ ಮತ್ತು ಅವರ ಸಾಧನೆಗಳಿಗೆ ಹಾಗೂ ವ್ಯಕ್ತಿತ್ವಕ್ಕೆ ಒಂದು ನುಡಿನಮನದ ಪ್ರಯತ್ನ 🙏🙏🙏

No comments:

Post a Comment