ನನ್ನ ಬಗ್ಗೆ ತಿಳಿಯಬೇಕೆ ?

My photo
A guy with habit of learning from everyone and from anything... I would say i'm a guy hiding all my sorrows and sadness behind my "SMILE" :P Come in with me.. You should be able to write more "about me" :) ಭಾವನೆಗಳ ಲೋಕದಲ್ಲಿ ವಿಹರಿಸಲು ಇಷ್ಟ. ಒಂಟಿತನ ಹಿತವೆನಿಸುತ್ತದೆ, ಗುಂಪಿನಲ್ಲಿರುವಾಗ ಖುಷಿ. ಕನಸು ಕಾಣುವುದು ಕಡಿಮೆ, ನೆನಪುಗಳ ನಡುವೆ ಕನಸುಗಳು ಕಳೆದುಹೋಗುತ್ತವೆ.

Sunday, 3 May 2020

ಶ್ರೀಸತ್ಯಾತ್ಮನುತಿಪಂಕಜವು

ಉದ್ಧಾರವಾಗಲು ನಮಗೆ ಬೇರೆ ಮಾರ್ಗವು ಕಾಣಿಸದು
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ

ಶ್ರೀಸತ್ಪ್ರಮೋದರ ಕರಜರು ನೀವು ವಿದ್ಯಾಪೀಠದ ನಾಯಕರು
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ ॥1॥
ಪರಮಹಂಸರು ನೀವು ಅಭಿನವ ಶ್ರೀರಘೂತ್ತಮರು
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ ॥2॥

ಮಂದಸ್ಮಿತಮುಖರು ನೀವು ಸದಾ ಉಲ್ಲಾಸದ ತವರೂರು
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ ॥3॥
ಸರ್ವಜನ ಹಿತ ಬಯಸುವ ನೀವು ಕರುಣೆಯ ಸಾಗರರು
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ ॥4॥

ಸಂಸ್ಥೆಗಳನ್ನು ಸ್ಥಾಪಿಸಿ ನೀವು ಸತ್ಕಾರ್ಯಗಳನ್ನು ನಡೆಸುವಿರಿ
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ ॥5॥
ತಂದೆತಾಯಿಗಳಿಗಿಂತಲೂ ನೀವು ಶಿಷ್ಯರ ಪೋಷಣೆ ಮಾಡುವಿರಿ
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ ॥6॥

ಯುವತಿಯುವಕರನ್ನು ನೀವು ಸನ್ಮಾರ್ಗಕೆ ತಂದು ಹಚ್ಚುವಿರಿ
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ ॥7॥
ಮಂತ್ರೋಪದೇಶಿಸಿ ನೀವು ವಿಪ್ರತ್ವವ ಉಳಿಸುವಿರಿ
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ ॥8॥

ಮೂರ್ತಿಗಳನ್ನು ಸ್ಥಾಪಿಸಿ ನೀವು ಸನ್ನಿಧಾನವ ತುಂಬುವಿರಿ
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ ॥9॥
ಸಂಸ್ಥಾನ ಪೂಜೆಯ ನೀವು ನಿತ್ಯವೂ ಭಕುತಿಲಿ ಮಾಡುವಿರಿ
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ ॥10॥

ಮಂತ್ರಾಕ್ಷತೆಯಿಂದಲೇ ನೀವು ಕಷ್ಟಗಳನ್ನು ಕಳೆಯುವಿರಿ
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ ॥11॥
ಮಂತ್ರಾಕ್ಷತೆಯಿಂದಲೇ ನೀವು ಇಷ್ಟಗಳನ್ನು ಉಣಿಸುವಿರಿ
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ ॥12॥

ನಂದಶಾಸ್ತ್ರದಿ ಮಿಂದ ನೀವು ಆನಂದದಿ ಟಿಪ್ಪಣಿ ರಚಿಸುವಿರಿ
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ ॥13॥
ಪ್ರಾಚೀನಜ್ಞಾನಿಗಳನ್ನು ನೀವು ಭಕುತಿಯಿಂದಲಿ ನಮಿಸುವಿರಿ
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ ॥14॥
 
ಗುರುಗಳ ಶತಾಬ್ದವ ನೀವು ಸೇವಾರೂಪದಿ ಮಾಡಿದಿರಿ
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ ॥15॥
ಉದ್ಧಾರವಾಗಲು ನಮಗೆ ಬೇರೆ ಮಾರ್ಗವು ಕಾಣಿಸದು
ಉದ್ಧಾರಕ ಗುರುವಾಗೆಮಗೆ ನೀವು ಲಭಿಸಿರಿ ಪ್ರತಿ ಜನ್ಮದಲಿ ॥16॥
ಭವ್ಯಪೀಠದಿ ಗುರುಗಳಿಗಿಂದು ರಜತಮಹೋತ್ಸವವು
ಕಣ್ತುಂಬಿಕೊಂಡ ನಾವೇ ಇಂದು ಧನ್ಯರು ಧನ್ಯರು17
ಸಾಕ್ಷೀನಾಥವಿಠ್ಠಲಾಭಿನ್ನ ವೇದವ್ಯಾಸ ಪದಾಶ್ರಿತನು
ಆಲೂರಾನ್ವಯಜಾತನು ನಾನು ರಚಿಸುವೆ ಕೃತಿಯನ್ನು18
ಸಂಸಾರಬಾಧೆಯ ಕಳೆವುದು ಸತ್ಯಾತ್ಮನುತಿಪಂಕಜವು
ಭಕುತಿಯಿಂದರ್ಪಿಸುವೆ ಶ್ರೀಸತ್ಯಾತ್ಮಪದಪಂಕಜದಿ19

ಶ್ರೀಸತ್ಯಾತ್ಮನುತಿಪಂಕಜ by Alakananda B Alur


ಶ್ರೀಕೃಷ್ಣಾರ್ಪಣಮಸ್ತು

No comments:

Post a Comment